ಕೃಷ್ಣ ಎನಬಾರದೇ?

ಹೆಸರು ಕೃಷ್ಣ. ಸ್ನೇಹಿತರ ವಲಯದಲ್ಲಿ ಕಿಟ್ಟಿ. ದಾಖಲಾತಿಗಳಲ್ಲಿ ಎಸ್‌ ಕೃಷ್ಣ. ಗಾಂಧೀನಗರದಲ್ಲಿ ಕ್ಯಾಮರಾಮನ್‌ ಕೃಷ್ಣ. ಸಿನಿಮಾ ಪ್ರಿಯರಿಗೆಲ್ಲ ಮುಂಗಾರುಮಳೆ ಕೃಷ್ಣ!

ಇವರು ಬಂದಿದ್ದು ಬೆಂಗಳೂರಿನ ನೆಲಮಂಗಲದ ಸಮೀಪದಿಂದ. ಅಪ್ಪ ಸರಕಾರಿ ಉದ್ಯೋಗಿ. ಅಮ್ಮ ಗೃಹಿಣಿ. ಮಗ ಎಂಜಿನೀಯರೋ ಡಾಕ್ಟರೋ ಆದರೆ ಚೆನ್ನಾಗಿರುತ್ತದೆ ಎಂದು ಭಾವಿಸುತ್ತಿದ್ದ ಮಧ್ಯಮ ವರ್ಗದ ಕುಟುಂಬ. ಮಗನನ್ನು ಪಿಯೂಸಿಯಲ್ಲಿ ವಿಜ್ಞಾನ ವಿಭಾಗಕ್ಕೆ ಸೇರಿಸುವಾಗ ಬಹುಶಃ ಅಪ್ಪ ಅಮ್ಮನ ಕಣ್ಣ ಮುಂದೆ ಇದ್ದಿದ್ದು ಕಂಪ್ಯೂಟರ್‌ ಸೈನ್ಸು ಅಥವಾ ಇಲೆಕ್ಟ್ರಾನಿಕ್ಸ್‌ನಲ್ಲಿ ಎಂಜಿನೀಯರಿಂಗ್‌. Read More »

ಸಿನಿಮಾ: ಆಹಾ ಬೆಳದಿಂಗಳು!

ಬಾದಾಮಿ ಹೌsನಲ್ಲಿರುವ ಪ್ರಿಯದರ್ಶಿನಿ ಚಿತ್ರಮಂದಿರ ಎಂದರೆ ಸಾಕು. ಮನಸ್ಸಿನಲ್ಲಿ ಸಿನಿಮಾ ರೀಲು ಸುತ್ತಿಕೊಳ್ಳತೊಡಗುತ್ತದೆ. ಸುಮಾರು ನೂರು ಜನ ಕುಳಿತುಕೊಳ್ಳಬಹುದಾದ ಪುಟ್ಟ ಚಿತ್ರಮಂದಿರದ ಕೊನೆಯ ಸಾಲಿನ ಮೂಲೆಯ ಕುರ್ಚಿಯಲ್ಲೇ ಕುಳಿತು ಅದೆಷ್ಟೋ ಸಿನಿಮಾ ನೋಡಿದ್ದೇನೆ. `ದ್ವೀಪ’ ಚಿತ್ರದಿಂದ `ಶಾಂತಿ’ ಚಿತ್ರದ ತನಕ ಎರಡೂ ಅತಿಶಯಗಳನ್ನು ಅನುಭವಿಸಿದ್ದೇನೆ. ಬರಗೂರು ರಾಮಚಂದ್ರಪ್ಪ ನಿರ್ದೇಶಿಸಿದ ಚಿತ್ರ `ಶಾಂತಿ’ ಎನ್ನುವ ಮಾಹಿತಿ ಯಾವ ಅತಿಶಯದ ತುದಿಯಲ್ಲಿ ಯಾವ ಚಿತ್ರವಿದೆ ಎನ್ನುವುದನ್ನು ಖಚಿತಪಡಿಸುತ್ತದೆ!
ಮೊನ್ನೆ ಪ್ರಿಯದರ್ಶಿನಿಯ ಕೊನೆಯ ಸಾಲಿನ ಮೂಲೆಯಲ್ಲಿ ಕುಳಿತು ಮತ್ತೊಂದು ಚಿತ್ರ ನೋಡಿದೆ. ಆ ಚಿತ್ರಮಂದಿರದಲ್ಲಿನ ವಾತಾವರಣಕ್ಕೊಂದು ವಿಚಿತ್ರವಾದ ವಾಸನೆಯಿದೆ. ಅದು ಎಂಥ ವಾಸನೆ ಎಂದು ವಿವರಿಸುವುದು ಕಷ್ಟ. ಈ ಹಿತವಾದ ವಾಸನೆಯನ್ನು ಅನುಭವಿತ್ತ ಕುಳಿತಿದ್ದಾಗ ಪಕ್ಕದಲ್ಲಿ ಕುಳಿತಿದ್ದ ಎ್ಟಿಐ ಗೆಳೆಯ ಅಭಯ ಹೇಳಿದ: ಪೂನಾ ಇ್ಸ್ಟಿಟ್ಯೂ್ನ ಚಿತ್ರಮಂದಿರಗಳಲ್ಲೂ ಇಂಥದ್ದೇ ವಾಸನೆಯಿರುತ್ತದೆ. ಬಹುಶಃ ಅದು ಒಳ್ಳೆಯ ಚಿತ್ರಗಳ ವಾಸನೆಯಿರಬಹುದು ಎಂದು ಅನಂತರ ನಾವು ತೀರ್ಮಾನಕ್ಕೆ ಬಂದೆವು. ಏಕೆಂದರೆ ಆ ದಿನ ಅಂಥದ್ದೊಂದು ಒಳ್ಳೆಯ ಚಿತ್ರ ನೋಡಿದ್ದೆವು. ಆ ಚಿತ್ರದ ಹೆಸರು: ಕಾಡ ಬೆಳದಿಂಗಳು. Read More »

ಉಪ್ಪಿಯ ನೆನಪುಗಳು

uppi-gokarna.jpgಡಾ.ರಾಜ್‌ಕುಮಾರ್‌ ಇಲ್ಲದೇ ಒಂದು ವರ್ಷ. 365 ದಿನಗಳ ನಂತರವೂ ವರನಟನ ಸಾವು ನಮ್ಮ ಮನಸ್ಸಿನಲ್ಲಿನ್ನೂ ಜೀವಂತವಾಗಿದೆ. `ಓಂ’ ಚಿತ್ರದ ನಿರ್ದೇಶನದ ಸಂದರ್ಭದಲ್ಲಿ ರಾಜ್‌ಕುಮಾರ್‌ ಜೊತೆ ನಿಕಟ ಸಂಪರ್ಕ ಇಟ್ಟುಕೊಂಡಿದ್ದವರು ನಟ, ನಿರ್ದೇಶಕ ಉಪೇಂದ್ರ. ತಮ್ಮ ಮನೆಯ ಟೆರೇಸಿನ ಮೇಲೆ ಕುಳಿತು ಆ ದಿನಗಳನ್ನು ಉಪ್ಪಿ ನೆನಪು ಮಾಡಿಕೊಂಡರು. ಆಗ ಹೆಕ್ಕಿಕೊಂಡ ಸಂಗತಿಗಳನ್ನು ಇಲ್ಲಿ ದಾಖಲಿಸಲಾಗಿದೆ. Read More »

ಕತೆ: ಚಿಲ್ಲರೆ

ಹೋದ್ಯೋಗಿ ವಿಕಾಸ್‌ ಜೊತೆ ಮಣಿಪಾಲ್‌ ಸೆಂಟರ್‌ನ ಎರಡನೇ ಮಹಡಿಯಲ್ಲಿ ಕುಳಿತು ಮೊನ್ನೆ ಹರಟೆ ಹೊಡೆಯುತ್ತಿದ್ದೆ. ಹಾಗೆ ಹರಟೆ ಹೊಡೆಯುತ್ತಿದ್ದ ಹಂತದಲ್ಲಿ ಥಟ್ಟನೇ ಏನೋ ಹೊಳೆದಂತಾಗಿ ಇಂಥದ್ದೊಂದು ಕತೆ ಬರೆಯೋಣ ಅನಿಸಿತು. ಹಾಗೆ ಅನಿಸಿದ ತಕ್ಷಣ ಅರ್ಧ ಗಂಟೆ ಕುಳಿತು ಇದನ್ನು ಬರೆದೆ. ಓದಿ ಪ್ರತಿಕ್ರಿಯಿಸಿ. ಅಂದಹಾಗೆ ಈ ಕತೆಯಲ್ಲಿ ಬರುವ ಪಾತ್ರಕ್ಕೂ ವಿಕಾಸ್‌ಗೂ ಯಾವುದೇ ಸಂಬಂಧವಿಲ್ಲ ಎಂದು ತಿಳಿಸಲು ವಿಷಾದಿಸುತ್ತೇನೆ. Read More »

ವಿಶ್ಲೇಷಣೆ: ಬಟ್ಟೆ ಕಡಿಮೆ, ಹೆಚ್ಚು ದುಡಿಮೆ!

ವಿಕಾಸ ನೇಗಿಲೋಣಿ ಬರಹ:ಈಸಬೇಕು ಇದ್ದು ಜೈಸಬೇಕು. ನಿಜ, ಕನ್ನಡದ ಹೀರೋಯಿನ್‌ಗಳೂ ಕೆಲವೊಮ್ಮೆ ಈಜುಡುಗೆ ತೊಡಬೇಕು, ಬರದಿದ್ದರೂ ಈಸಬೇಕು. ನಾಯಕಿಯರ ಮೈತುಂಬ ಬಟ್ಟೆ ಕೆಲವು ನಿರ್ಮಾಪಕರ ಸಾಮಾಜಿಕ ಸಮಸ್ಯೆ. ಅವರ ಪ್ರಕಾರ ಬಟ್ಟೆ ಕಿರಿದಾದರೆ ಅನುಮಾನವಿಲ್ಲ, ಸಿನಿಮಾ ಹಿಟ್ಟೇ, ಬಟ್ಟೆ ನಂಬಿದರೆ ನಿರ್ಮಾಪಕ ತಾ ಕೆಟ್ಟೆ! Read More »

ವರದಿ:ಪ್ರೇಮ್‌ ಗೀತೆ

prem-rakshitha-1.jpgಹೀರೋ ಆಗುತ್ತೇನೆ ಎಂದು ನಿರ್ದೇಶಕ ಪ್ರೇಮ್‌ ಹೊರಟಾಗ ಬೇಡ ಎಂದವರೇ ಹಲವರು. ಹೀಗಿದ್ದರೂ ಪ್ರೇಮ್‌ ಹೀರೋ ಆಗಿದ್ದಾರೆ. `ಪ್ರೀತಿ ಏಕೆ ಭೂಮಿ ಮೇಲಿದೆ?’ ಚಿತ್ರೀಕರಣ ಅರ್ಧದಷ್ಟು ಮುಗಿದಿದೆ. ಈ ನಡುವೆ ರಕ್ಷಿತಾ ಜೊತೆ ಮದುವೆಯಾಗಿದೆ. `ಪ್ರೀತಿ’ಯ ಹಾಡುಗಳು ಬಿಡುಗಡೆಯಾಗಿರುವ ಸಂದರ್ಭದಲ್ಲಿ ಪ್ರೇಮ್‌ ಮೊನ್ನೆ ಪತ್ರಕರ್ತರ ಜೊತೆ ಮಾತಾಡಿದರು. ಅದರ ವರದಿ ಇಲ್ಲಿದೆ. Read More »

ಅವಳು

ಇದನ್ನು ಪುಟ್ಟ ಕತೆಯೆನ್ನಬಹುದು. ಆತ್ಮಕತೆಯೆನ್ನಬಹುದು. ಡೈರಿ ಬರವಣಿಗೆ ಎನ್ನಬಹುದು. ಗೊತ್ತಿಲ್ಲ. ಪ್ರಾಮಾಣಿಕವಾಗಿ ಹೇಳಬೇಕೆಂದರೆ ಇದು ನನ್ನ ಪ್ರೀತಿಯ ಹುಟ್ಟಿನ ಕತೆ. ಅಥವಾ ಅವಳು ಹುಟ್ಟಿದ ಕತೆ. ಅವಳು ಬೆಳೆದ ಕತೆ. ಬೆಳೆಯುತ್ತ ಬೆಳೆಯುತ್ತ ಅವಳು ಬದಲಾದ ಕತೆ. ಬದಲಾಗುತ್ತ ಬದಲಾಗುತ್ತ ಬದಲಾಗುತ್ತಲೇ ಹೋದ ಕತೆ. ಅಥವಾ ಬದಲಾಗಿದ್ದು ನಾನಾ? ಓದಿದ ನೀವೇ ಹೇಳಬೇಕು. Read More »

ಕತೆ: ಕಾವ್‌ ಕಾವ್‌!

ಯೋ…ಸುಟ್‌ ಕೂಸೇ’ ಎಂದು ಬಯ್ದುಕೊಳ್ಳುತ್ತಾಳೆ ಹಿರ್ಬೆ, ತನ್ನಷ್ಟಕ್ಕೆ.ಹಿರ್ಬೆ ಅಂದರೆ ಗೊತ್ತಲ್ಲ?ಹಿರಿಯಬ್ಬೆ.

ಹಿರಿ ಅಬ್ಬೆ.

ಅಂದರೆ ದೊಡ್ಡಮ್ಮ.

ಅವಳ ಕೆಲಸ ಬೆಳಕು ಹರಿಯುವ ಮೊದಲೇ ಶುರುವಾಗುತ್ತದೆ. ಬಚ್ಚಲ ಒಲೆಗೆ ಬೆಂಕಿ ಹಾಕುವುದರೊಂದಿಗೆ. ಅಷ್ಟಾದ ಮೇಲೆ ಕೊಟ್ಟಿಗೆಗೆ ಹೋಗಿ ದನಗಳನ್ನು ದಣಪೆಯಿಂದ ಆಚೆ ದಾಟಿಸಿ ಬಂದು ಹಿರ್ಬೆ ಮುಖ ತೊಳೆದುಕೊಳ್ಳುತ್ತಾಳೆ. ದೇವರಿಗೊಂದು ನಮಸ್ಕಾರ ಮಾಡಿ ಪುನಃ ಕೊಟ್ಟಿಗೆಗೆ. ಈ ಸಲ ಆಕಳಿಗೆ ಗೋಗ್ರಾಸ. ಮತ್ತೆ ಮನೆಗೆ ಬಂದು ಕಾಲು ತೊಳದುಕೊಂಡವಳು ಹೆಬ್ಬಾಗಿಲು ದಾಟಿ ಅಂಗಳಕ್ಕೆ ಬರುತ್ತಾಳೆ. ಅದರ ತುದಿಯಲ್ಲಿ ತುಳಸಿ ಕಟ್ಟೆಯಿದೆ. ಅದನ್ನು ಮೂರು ಸುತ್ತು ಸುತ್ತುತ್ತಾಳೆ.

`ಏಳು ನಾರಾಯಣನೇ ಏಳು ಲಕ್ಷ್ಮೀರಮಣ…’ Read More »

ಸೋಲಿನ ಟಾನಿಕ್‌!

ಕ್ರಿಕೆಟ್‌ನಲ್ಲಿ ಸೋತರೆ ಭಾರತಕ್ಕೆ ಒಳ್ಳೆಯದಾಗುತ್ತದೆ. ವಿಶ್ವಕಪ್‌ ಕ್ರಿಕೆಟ್‌ನಲ್ಲಿ ಸೋತರೆ ಇನ್ನೂ ಒಳ್ಳೆಯದಾಗುತ್ತದೆ. ಜನ ಕ್ರಿಕೆಟ್‌ ಬಿಟ್ಟು ಬೇರೆ ಜಗತ್ತನ್ನು ನೋಡತೊಡಗುತ್ತಾರೆ. ಬೇರೆ ಕೆಲಸಗಳಲ್ಲಿ ತೊಡಗಿಸಿಕೊಳ್ಳುತ್ತಾರೆ. ಬರದ ನೀರು, ಮುರಿದ ಬಸ್‌ಸ್ಟ್ಯಾಂಡು, ಸರಿಯಿಲ್ಲದ ಫುಟ್‌ಪಾತ್‌ಗಳು ಜನರ ಗಮನಕ್ಕೆ ಬರುತ್ತವೆ. ಬ್ರೆಜಿಲ್‌ ತಂಡ ಫುಟ್ಬಾಲ್‌ ವಿಶ್ವಕಪ್‌ ಸೋತಾಗ ಅಲ್ಲಿನ ಎಕಾನಮಿ ಸುಧಾರಿಸುತ್ತದೆ! Read More »

ಮಾತು ಬಂಗಾರ

ಮಾಜಿ ಕ್ರಿಕೆಟ್‌ ಆಟಗಾರರು ವಿರೋಧ ಪಕ್ಷದಲ್ಲಿದ್ದಾರೆ. ಕ್ರಿಕೆಟ್‌ ಅಭಿಮಾನಿಗಳು ಅವರಿಗೆ ಹೊರಗಿನಿಂದ ಬೆಂಬಲ ಕೊಡುತ್ತಿದ್ದಾರೆ. ಪತ್ರಿಕೆಗಳು, ಚಾನೆಲ್‌ಗಳದ್ದು ಸಹ ಅದೇ ಪಕ್ಷ. ಒಟ್ಟಾರೆ ರಾಹುಲ್‌ ದ್ರಾವಿಡ್‌ ಈಗ ಗಳಿಸಿದ ರನ್‌ಗಳಿಗಿಂತ ಹೆಚ್ಚು ಪ್ರಶ್ನೆಗಳನ್ನು ಎದುರಿಸುತ್ತಿದ್ದಾರೆ. ತಲೆಗೊಂದು ಸಲಹೆಗಳು ಬರುತ್ತಿವೆ. Read More »