February 20, 2008 – 2:10 pm
ಮುಗಿಲಪೇಟೆಯಿಂದ ಬಣ್ಣಬಣ್ಣದ ಕಾಗದ ತಂದಿದ್ದಾರೆ. ಮಳೆಕಾಡಿನ ಕಡ್ಡಿಗಳಿಂದ ಹಂದರ ರಚಿಸಿ ಭಾವನೆಗಳ ಅಂಟಿನಿಂದ ಅಂಟಿಸಿದ್ದಾರೆ. ತುಸು ಹೆಚ್ಚೇ ಎನಿಸುವಂತೆ ಸಂಭಾಷಣೆಗಳ ಬಾಲಂಗೋಚಿಯನ್ನು ಜೋಡಿಸಿ, ಜನಪ್ರಿಯ ಸಿನಿಮಾಗಳ ಮಿನುಗುವ ಬೇಗಡೆಯಿಂದ ಅಲಂಕರಿಸಿ ನಿರ್ದೇಶಕ ಯೋಗರಾಜ್ ಭಟ್ `ಗಾಳಿಪಟ’ ಹಾರಿಸಿದ್ದಾರೆ!ಗಾಳಿಪಟ ಇಲ್ಲಿ ಪತ್ರವಾಗುತ್ತದೆ. ಪಾತ್ರವಾಗುತ್ತದೆ. ರೂಪಕವಾಗುತ್ತದೆ. ಹಸಿರೇ ತುಂಬಿಕೊಂಡಿರುವ, ಕೆಸರಿಲ್ಲದ, ಮುಗಿಲುಪೇಟೆಯೆಂಬ ಹೊಸಪೇಟೆಯನ್ನು ಸೃಷ್ಟಿಸುವ ನಿರ್ದೇಶಕರು ಸೂತ್ರ ಕಿತ್ತುಹೋದ ಗಾಳಿಪಟದಂತಾಗಿರುವ ಮೂರು ಹುಡುಗರನ್ನು ಈ ಊರಿಗೆ ತರುತ್ತಾರೆ. ಅದರಲ್ಲೊಬ್ಬ ವಾಚಾಳಿ. ಮತ್ತೊಬ್ಬ ಭಗ್ನಪ್ರೇಮಿ. ಇನ್ನೊಬ್ಬ ಸಂಕೋಚದ ಮುದ್ದೆ. ಇದಕ್ಕೆ ತದ್ವಿರುದ್ಧವಾಗಿರುವ [...]
February 20, 2008 – 2:07 pm
ಭಾವನೆಗಳ ನಂಟಿನ ಜೊತೆ ಪ್ರೀತಿಯ ಅಂಟು. ಹಾಸ್ಯದ ಜೊತೆ ಸ್ವಲ್ಪ ಅಪಹಾಸ್ಯ. ಯುರೋಪ್ನ ಬೆಟ್ಟ ಗುಡ್ಡಗಳಲ್ಲಿ ಹಾಡು, ಕುಣಿತ. ಬ್ಯಾಂಕಾಕ್ನಲ್ಲೊಂದು ಐಟಮ್ ನಂಬರ್. ನಡುನಡುವೆ ದುಷ್ಟ ಮರ್ದನ ಮತ್ತು ರುಂಡ ಛೇದನ!
ದರ್ಶನ್ ಸಿನಿಮಾಗಳಿಗೆ ಸಹಜ ಎನಿಸುವ ಈ ಸೂತ್ರದೊಳಗೇ `ಗಜ’ ಕತೆ ತೆರೆದುಕೊಳ್ಳುತ್ತದೆ, ಬೆಳೆಯುತ್ತದೆ ಮತ್ತು ಮುಗಿಯುತ್ತದೆ. ಸಾಮಾನ್ಯ ಹುಡುಗನೊಬ್ಬ ಹುಡುಗಿಯೊಬ್ಬಳ ಪ್ರಪಂಚ ಪ್ರವೇಶಿಸಿ, ಆ ಜಗತ್ತಿನಲ್ಲಿ ನಡೆಯುವ ಜಗಳದಲ್ಲಿ ಭೀಕರವಾಗಿ ಹೊಡೆದಾಡಿ, ಗ್ಲಾಸು ಪುಡಿಪುಡಿ ಮಾಡಿ, ಕಾರುಗಳನ್ನು ಆಕಾಶಕ್ಕೆ ಹಾರಿಸಿ, ಸಂಹಾರ ಇತ್ಯಾದಿ ಚಟುವಟಿಕೆಗಳನ್ನು ಸಾಂಗವಾಗಿ [...]
February 20, 2008 – 2:04 pm
`ಬೆಳದಿಂಗಳಾಗಿ ಬಾ’ ಸಿನಿಮಾದಲ್ಲಿ ಬೆಳದಿಂಗಳಿಲ್ಲ. ಆದರೆ ಬೆಳದಿಂಗಳಂಥ ಹುಡುಗಿಯಿದ್ದಾಳೆ. ಬಾ ಎಂದು ಯಾರೂ ಕರೆಯುವುದಿಲ್ಲ. ಆದರೂ ಅಮವಾಸ್ಯೆಯಂಥ ಡಾನ್ಗಳು ಪದೇ ಪದೇ ಹಾಜರಾಗುತ್ತಾರೆ. ಪ್ರೀತಿಯನ್ನು ಪ್ರೀತಿಯಿಂದಲೇ ಗೆಲ್ಲಲು ಹೊರಟವನ ಕತೆ ಅಂದುಕೊಂಡಂತೆಯೇ ಆರಂಭವಾಗಿ ಅಂದುಕೊಂಡಂತೆಯೇ ಮುಗಿಯುತ್ತದೆ. ಆದರೆ ನಡುವಿನ ಹಾದಿಯಲ್ಲಿ ಮುನ್ಸೂಚನಾ ಫಲಕಗಳಿಲ್ಲದೇ ಸಿಗುವ ಅಚ್ಚರಿಯ ತಿರುವುಗಳಿವೆ. ಈ ಅಚ್ಚರಿಗಳೇ ಸಿನಿಮಾದ ನಿಜವಾದ ಅಚ್ಚರಿ!
August 26, 2007 – 8:11 am
ಮೊನ್ನೆ ಸಂಜೆ `ಮಾತಾಡ್ ಮಾತಾಡು ಮಲ್ಲಿಗೆ’ ಚಿತ್ರ ನೋಡಿ ಐನಾಕ್ಸ್ನಿಂದ ಹೊರಕ್ಕೆ ಬಂದು ಮೆಟ್ಟಿಲು ಇಳಿಯುತ್ತಿದ್ದರೆ ನಾಗತಿಹಳ್ಳಿ ಚಂದ್ರಶೇಖರ್ ಬರೆದ ಕತೆಗಳೆಲ್ಲ ನೆನಪಾಗುತ್ತಿದ್ದವು. `ಮಲೆನಾಡಿನ ಹುಡುಗಿ ಮತ್ತು ಬಯಲು ಸೀಮೆಯ ಹುಡುಗ’ ಎಂಬ ಅವರ ಕತೆಯನ್ನು ಎಷ್ಟೆಲ್ಲ ಇಷ್ಟಪಟ್ಟಿದ್ದೆ. ಹದಿನೈದು ವರ್ಷಗಳ ಹಿಂದೆ, ಪ್ರೀತಿಯ ಅಮೂರ್ತತೆಯನ್ನು ಅರ್ಥಮಾಡಿಕೊಳ್ಳಲಾಗದೇ ಒದ್ದಾಡುತ್ತ, ಸಹಪಾಠಿ ಹುಡುಗಿಯರನ್ನು ಮನಸ್ಸಿನಲ್ಲೇ ಗುಟ್ಟಾಗಿ ಪ್ರೀತಿಸಿಬಿಡುತ್ತ ಹೈಸ್ಕೂಲಿಗೆ ಹೋಗುತ್ತಿದ್ದ ದಿನಗಳಲ್ಲಿ ಓದಿದ ಕತೆಯದು. ಆ ಕತೆಯನ್ನು ಗುಂಡ್ಕಲ್ಲಿನ ಹೆಂಚಿನ ಮನೆಯ ಮಹಡಿಯಲ್ಲಿ ಕುಳಿತು ಓದಿದ ಆ ಸಂಜೆ [...]
August 23, 2007 – 8:38 am
ಸಿನಿಮಾವೊಂದು ಮಾಮೂಲಿ ಮಾತಿನ ಸನ್ನಿವೇಶದೊಂದಿಗೆ ಶುರುವಾಗಬಹುದು. ಹಾಡಿನೊಂದಿಗೆ, ಹೊಡೆದಾಟದೊಂದಿಗೆ ಶುರುವಾಗಬಹುದು. ಚೇಸ್ನೊಂದಿಗೆ, ತಮಾಷೆಯೊಂದಿಗೆ, ಪ್ರಣಯದೊಂದಿಗೆ ಶುರುವಾಗಬಹುದು. ಇವೆಲ್ಲಾ ಪ್ರಯೋಗಗಳೂ ನಡೆದಿವೆ. ಮುಗಿದಿವೆ. ಹೀಗಿದ್ದರೂ ಪ್ರಶ್ನೆ ಹಾಗೇ ಉಳಿಯುತ್ತದೆ. ಪಿಚ್ಚರ್ ಹೇಗೆ ಶುರುವಾದರೆ ಚೆನ್ನಾಗಿರುತ್ತದೆ?
ಬಾದಾಮಿ ಹೌsನಲ್ಲಿರುವ ಪ್ರಿಯದರ್ಶಿನಿ ಚಿತ್ರಮಂದಿರ ಎಂದರೆ ಸಾಕು. ಮನಸ್ಸಿನಲ್ಲಿ ಸಿನಿಮಾ ರೀಲು ಸುತ್ತಿಕೊಳ್ಳತೊಡಗುತ್ತದೆ. ಸುಮಾರು ನೂರು ಜನ ಕುಳಿತುಕೊಳ್ಳಬಹುದಾದ ಪುಟ್ಟ ಚಿತ್ರಮಂದಿರದ ಕೊನೆಯ ಸಾಲಿನ ಮೂಲೆಯ ಕುರ್ಚಿಯಲ್ಲೇ ಕುಳಿತು ಅದೆಷ್ಟೋ ಸಿನಿಮಾ ನೋಡಿದ್ದೇನೆ. `ದ್ವೀಪ’ ಚಿತ್ರದಿಂದ `ಶಾಂತಿ’ ಚಿತ್ರದ ತನಕ ಎರಡೂ ಅತಿಶಯಗಳನ್ನು ಅನುಭವಿಸಿದ್ದೇನೆ. ಬರಗೂರು ರಾಮಚಂದ್ರಪ್ಪ ನಿರ್ದೇಶಿಸಿದ ಚಿತ್ರ `ಶಾಂತಿ’ ಎನ್ನುವ ಮಾಹಿತಿ ಯಾವ ಅತಿಶಯದ ತುದಿಯಲ್ಲಿ ಯಾವ ಚಿತ್ರವಿದೆ ಎನ್ನುವುದನ್ನು ಖಚಿತಪಡಿಸುತ್ತದೆ!
ಮೊನ್ನೆ ಪ್ರಿಯದರ್ಶಿನಿಯ ಕೊನೆಯ ಸಾಲಿನ ಮೂಲೆಯಲ್ಲಿ ಕುಳಿತು ಮತ್ತೊಂದು ಚಿತ್ರ ನೋಡಿದೆ. ಆ [...]
ಆ ದಿನ ಸಂಜೆ ನಾನೊಂದು ವಿಚಿತ್ರ ಸ್ಥಿತಿಯಲ್ಲಿದ್ದೆ. ಚಿತ್ರೋತ್ಸವ ವರದಿ ಮಾಡಲು ಬೆಂಗಳೂರಿನಿಂದ ಗೋವಾಕ್ಕೆ ಬಂದ ಗೆಳೆಯರೆಲ್ಲ ಹೊರಟು ಹೋಗಿದ್ದರು. ಕಲಾ ಅಕಾಡೆಮಿಯ ಎದುರಿನ ರಸ್ತೆಯಲ್ಲಿ, ಮಾಂಡೋವಿ ನದಿಯ ಪಕ್ಕದಲ್ಲಿ ನಡೆದುಕೊಂಡು ಹೋಗುತ್ತಿದ್ದರೆ ಈಗಲೇ ಬೆಂಗಳೂರಿಗೆ ವಾಪಸ್ ಹೊರಟುಬಿಡೋಣ ಅನಿಸುತ್ತಿತ್ತು. ಇಂಥ ಸ್ಥಿತಿಯಲ್ಲಿ ಐನಾಕ್ಸ್ಗೆ ಹೋಗಿ `ದಿ ಓಲ್ಡ್ ಬಾರ್ಬರ್’ ಚಿತ್ರ ನೋಡಿದೆ. ಚಿತ್ರ ಮುಗಿದಾಗ ರಾತ್ರಿ ಹನ್ನೊಂದೂವರೆ ಗಂಟೆ. ಐನಾಕ್ಸ್ನಿಂದ ಕಂಪಾಲ್ ತನಕ ರಾತ್ರಿಯ ಚಳಿಯಲ್ಲಿ ಒಬ್ಬನೇ ನಡೆದುಕೊಂಡು ಹೋಗುತ್ತಿದ್ದರೆ ತಲೆಯಲ್ಲಿ ಓಲ್ಡ್ ಬಾರ್ಬರ್ ಚಿತ್ರದ [...]